

11th September 2024

ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಕ್ಲಸ್ಟರ್ ಮಟ್ಟದ "ಪ್ರತಿಭಾ ಕಾರಂಜಿ" ಕಾರ್ಯಕ್ರಮ
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ.
ವಿಜಯಪುರ(ದೇವನಹಳ್ಳಿ):ತಾಲೂಕು ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ ವತಿಯಿಂದ ಶೈಕ್ಷಣಿಕ ಬಲವರ್ಧನೆ ವರ್ಷ 2024-25
ಉರ್ದು ಕ್ಲಸ್ಟರ್ ಮಟ್ಟದ "ಪ್ರತಿಭಾ ಕಾರಂಜಿ" ಕಾರ್ಯಕ್ರಮ ಗುರಪ್ಪನ ಮಠ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಪ್ರಬಂಧ ಬರವಣಿಗೆ,ಭಾಷಣ,ಚಿತ್ರ ಕಲೆ,ಅಲಂಕಾರಿಕ ಉಡುಗೆ,ಕಥೆ ಹೇಳುವುದು,ಮಿಮಿಕ್ರಿ ಸೇರಿದಂತೆ ಸುಮಾರು ವಿವಿಧ ಸ್ಪರ್ಧೆಗಳಲ್ಲಿ 9 ಶಾಲೆಯಿಂದ ಮಕ್ಕಳು ಭಾಗವಹಿಸಿದ್ದರು.
ಉರ್ದು ಇಸಿಒ ರಹತ್ ಉನಿಸ ಮಾತನಾಡಿ, ಪ್ರತಿಭಾ ಕಾರಂಜಿ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಗೊಳ್ಳಲು ಅವಕಾಶ ಸಿಗುತ್ತದೆ. ಮಕ್ಕಳನ್ನು ಕೇವಲ ಓದಿಗೆ ಸೀಮಿತಗೊಳಿಸದೆ ಅವರಲ್ಲಿನ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹ ಪೋಷಕರು ನೀಡಬೇಕು ಎಂದರು.
ಇ ಸಿ ಓ ಕೋಮಲ ಮಾತನಾಡಿ ಸೋಲು ಗೆಲುವು ಮುಖ್ಯವಲ್ಲ, ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರೆ ತಮ್ಮಲ್ಲಿರುವಂತಹ ಪ್ರತಿಭೆವನ್ನು ತೋರಿಸಲು ಅವಕಾಶ ಸಿಗುತ್ತದೆ ಎಂದು ಹೇಳಿದರು.
ಗುರಪ್ಪನ ಮಠ ಉರ್ದು ಪ್ರಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಮ್ ಸಿಯ, ಇ ಸಿ ಓ ಅನಂತ್, ನಾಗಪ್ಪ, ಸುಮಾ, ಬಿ ಆರ್ ಸಿ ಸಿ ಮಂಜುಳ, ಸಿ ಆರ್ ಪೀ ಕೃಷ್ಣ ರಾವ್ ಸೇರಿದಂತೆ ತಾಲೂಕಿನ ಎಲ್ಲಾ ಸಿ ಆರ್ ಪಿ ಸೇರಿದಂತೆ ಪೋಷಕರು ಇದ್ದರು.

ನೀರು ಬಳಕೆದಾರರ ಸಂಘಗಳು ಕಡೇ ಭಾಗದ ರೈತನಿಗೆ ನೀರು ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಿಲಿ:ಮಧು ಜಿ.ಮಾದೇಗೌಡ

ಶ್ರೀ ಬನ್ನಿ ಮಹಾಂಕಾಳಿ ದೇವಿಯ ಮಹಾಭಿಷೇಕದ ಪ್ರಯುಕ್ತ ಸರ್ವಧರ್ಮಗಳ 43 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

ಶ್ರೀಮತಿ ರಶ್ಮಿ ಪ್ರಶಾಂತ ಕುಲಕರ್ಣಿ ಇವರಿಂದ ಕನ್ನಡ ರಾಜ್ಯೋತ್ಸವ ಕುರಿತು ಕವನ ರಚನೆ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದಲ್ಲಿ ಇಂದು 15 ನೇ ದಿನಾಂಕ ಬುಧುವಾರ ಹಾಗೂ ನಾಳೆ 16 ನೇ ದಿನಾಂಕ ಗುರುವಾರ ಪುಣ್ಯಸ್ಮರಣೋತ್ಸವದ ಹಾಗೂ ಶ್ರೀ ಮಠದ ಉದ್ಘಾಟನೆ.